ಹಾಸ್ಯ ನಟ ನಿರ್ದೇಶಕ ನಾಗಶೇಖರ್ ಅವರ ’ಸಂಜು ವೆಡ್ಸ್ ಗೀತ’ ಶ್ರೀನಗರ ಕಿಟ್ಟಿ ಹಾಗೂ ಮೋಹಕ ತಾರೆ ರಮ್ಯ ಅಭಿನಯದ ಚಿತ್ರ ಸಾಲ್ವೆನ್ಸಿ ದೇಶದಲ್ಲಿ ಹಾಡೊಂದನ್ನು ಚಿತ್ರೀಕರಿಸಲು ಸಜ್ಜಾಗಿ ನಿಂತಿದೆ.
ದೀಪಾವಳಿ ಹಬ್ಬದ ಸಂಧರ್ಭದಲ್ಲಿ ಧ್ವನಿಸುರುಳಿಯನ್ನು, ಕ್ರಿಸ್ಮಸ್ ಹಬ್ಬಕ್ಕೆ ಚಿತ್ರವನ್ನು ಬಿಡುಗಡೆ ಮಾಡಲು ಸಿದ್ಧವಗುತ್ತಿರುವ ನಾಗಶೇSರ್ ನಿಜಜೀವನದಲ್ಲಿ ನಡೆದ ಕಥೆಯನ್ನು ಆಧರಿಸಿ ಈ ಚಿತ್ರ ಮಾಡುತ್ತಿದ್ದಾರೆ. ಬೆಂಗಳೂರಿನ ಸೆಂಟ್ರಲ್ ಜೈಲ್ ಹಾಗೂ ಅದರ ಎದುರಿನ ಮಹಾರಾಣಿಸ್ ಕಾಲೇಜ್ ಈ ಚಿತ್ರದ ಪ್ರಮುಖ ಸ್ಥಳ. ಈಗ ಸೆಂಟ್ರಲ್ ಜೈಲ್ ಇಲ್ಲದೆ ಇರುವ ಕಾರಣ ಕಂಠೀರವ ಸ್ಟುಡಿಯೊ ಒಳಗೆ ಇದನ್ನು ನಿರ್ಮಾಣ ಮಾಡಿ ಚಿತ್ರೀಕರಣ ಮಾಡಿದ್ದಾರೆ ನಾಗಶೇಖರ್. ಈ ಚಿತ್ರಕ್ಕಾಗಿ ಊಟಿಯಲ್ಲಿ ಕೆಲವು ದಿವಸಗಳ ಚಿತ್ರೀಕರಣವನ್ನು ಮಾಡಲಾಗಿದೆ. ಈ ಚಿತ್ರದ ಪ್ರಮುಖ ಪಾತ್ರಗಳಲ್ಲಿ ’ಬಂಧನ’ ಖ್ಯಾತಿಯ ಜೈಜಗದೀಶ್ ಹಾಗೂ ಸುಹಾಸಿನಿ ಅಭಿನಯಿಸಿದ್ದಾರೆ.